ಒಂಟಿ ಸಾಲು
(ಒಂದೊಂದೇ ಸಾಲಿನ ’ಸಾಲುಮಂಟಪ’ ಮಂಟಪಗಳಿವು).
* ಬಿದ್ದು ಹೋದ ಕಟ್ಟಡಗಳ ಮೇಲೆ ಪಕ್ಷಿಗಳು ಕುಳಿತಿವೆ, ಸಾಕ್ಷಿ ಪ್ರಜ್ಞೆ ಇಲ್ಲದೇ!!
* ಅವಳೆದೆಯ ಕಾವು ಅರ್ಥವಾಗುವ ವೇಳೆಗೆ ಆವಿಯಾಗಿದ್ದೆ!
* ನಾಳೆಯ ಬೆಳಕಿಗಾಗಿ ಹಂಬಲಿಸುತ್ತಾ… ಹಂಬಲಿಸುತ್ತಾ … ಕುರುಡನಾಗಿಬಿಟ್ಟೆ!
* ಹರಿದರಿದ ಸೆರಗಿನೊಳಗೆ ಚಿಂದಿಯಾಗದಿರಲಿ ಬದುಕು…
* ಮೆಲು ಮಾತುಗಳ ಮೃದುತನದಲಿ ಬೆನ್ನು ಸೇರಿದ ಕತ್ತಿಯಿಂದ ಸುರಿಯಲಿಲ್ಲ ರಕ್ತ!
* ಶಾಲೆಯ ಮೈದಾನ, ಸಿಹಿ ನೀರಿನ ಬಾವಿಯ ದಂಡೆ, ಬತ್ತದ ಗದ್ದೆಯ ಕಾಲುರಸ್ತೆಗಳಲ್ಲೆಲ್ಲ ಅವಳದೇ ನಗೆಯ ಕಲವರ; ಎಲ್ಲಡಗಿಹುದೀಗ?!
– ವೀರಣ್ಣ ಕಮ್ಮಾರ
